ಅಗುಳಿ ಕಿತ್ತಿಹ ಕದಕೆ
ರಕ್ಷೆ ನೀಡುವ ಧೈರ್ಯ
ಎಲ್ಲಿಂದ ಬರಬಹುದು
ಹೇಳು ಗೆಳೆಯ,
ಕಂಡ ಕಂಡಲ್ಲೆಲ್ಲಾ ಕೊರೆದ
ಕಾಂಡವ ಕಂಡೆ, ಮತ್ತೆ ಬುಡಮೇಲು
ಮರದ ಸಹಿತ.
ಮಾರುಮಾರಿಗೂ ಮಂದಿ
ಸೇರಿಹರು ಜೋಡಿಸಲು
ಮರಮುಟ್ಟು, ಒಣಸೀಳು
ಸಿಗಬಹುದೇ, ಎಂದು
ನೀರ ಕಾಯಿಸಿ ಬಿಸಿ ನೀರ
ಮೀಯಲು ಮೈನೋವು
ತಣಿಯುವುದು ಎಂದು ತಿಳಿದು
ಗೊತ್ತಿಲ್ಲ, ನಾಳೆ ಕುಡಿಯಲು
ನೀರಿಲ್ಲ, ಒಣಭೂಮಿ,
ಬರಡು ನೆಲ ಮತ್ತೆ ಜೊತೆಗಾರ
ಸೊಳ್ಳೆ, ತಿಗಣಿ
ತರುವಾಯ ತಡಿ ಮರುಳೇ,
ಅಷ್ಟಾಂಗವಕ್ರರು ತಾಯಗರ್ಭವ
ಸೀಳಿ ತಲೆಮಾರು ತಂತುಗಳು
ಬರಬಹುದು ನಾಳೆ
ಕಾಯುತಿದೆ ಕಾರ್ಕೋಟಕ
ಮೈಯೆಲ್ಲ ಉರಿನವೆಯ
ಬೆಂಕಿ ಎದ್ದು
ಮನುಜ ಮನುಜನ
ಮುಕ್ಕಿ ಹುರಿದು ತಿಂದು
ಹರವಾದ ದಾರಿಯಲಿ
ಹದವಾದ ಹುರುಪಿನಲಿ
ಅಭಿವೃದ್ಧಿ ಹೆಸರಿನಲಿ
ನಡೆಯುತಿದೆ ನಾಶ
ಗಿಡದ ಮರವೇರಿ
ಬುಡ ಕಡಿದ ಪೆದ್ದ
ಪಡದೇ ಇರನು ವಿಷಾದ
*****
Related Post
ಸಣ್ಣ ಕತೆ
-
ಸಾವಿಗೊಂದು ಸ್ಮಾರಕ
ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…
-
ಉರಿವ ಮಹಡಿಯ ಒಳಗೆ
ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…